ಪ್ರಾಣಶಕ್ತಿ ಜಾಗೃತಿಗೊಳಿಸುವ ಶಕ್ತಿ ಯಕ್ಷಗಾನಕ್ಕಿದೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 3 , 2014
|
ನವ೦ಬರ್ 3, 2014
|
ಪ್ರಾಣಶಕ್ತಿ ಜಾಗೃತಿಗೊಳಿಸುವ ಶಕ್ತಿ ಯಕ್ಷಗಾನಕ್ಕಿದೆ
ಕುಂದಾಪುರ :
ಯಕ್ಷಗಾನ ದೈವೀಕಲೆ. ಯಕ್ಷಗಾನದಿಂದ ಪ್ರಾಣಶಕ್ತಿ ಜಾಗತಿಯಾಗುತ್ತದೆ. ಸಂಸ್ಕೃತಿ, ಸಂಸ್ಕಾರ ಕಲಿಸುವ ಯಕ್ಷಗಾನವನ್ನು ಪ್ರೀತಿಸಿ, ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಮಂಡ್ಯ ಪಾಂಡವಪುರ ಶ್ರೀಕ್ಷೇತ್ರ ತ್ರಿಧಾಮ ಶ್ರೀಮಹಾಕಾಳಿ ಚಕ್ರೇಶ್ವರಿ ಪೀಠದ ಅವಧೂತ ಸಿಂಹ ಶ್ರೀ ವಿದ್ಯಾಹಂಸ ಭಾರತಿ ಸ್ವಾಮೀಜಿ ಹೇಳಿದರು.
ಭಾನುವಾರ ಸೌಕೂರು ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರುಗಿದ ಬಣ್ಣದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಬಣ್ಣದ ಹಿಂದೆ ಅಧ್ಯಾತ್ಮ ಚಿಂತನೆ ಇದೆ. ರಜೋ, ತಮೋ, ಸತ್ವಗುಣಗಳ ತಿಳುವಳಿಕೆ ನೀಡುವ ಬಣ್ಣ ಯಕ್ಷಗಾನದ ಮೈಲಿಗಲ್ಲು. ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಬಣ್ಣದ ವೇಷದ ಶ್ರೇಷ್ಠ ಕಲಾವಿದರು. ಅವರ ಸೌಜನ್ಯ, ಸರಳತೆ, ಕಲಾಪ್ರೀತಿ ಉಳಿಸುವ ಕೆಲಸ ಆಗಬೇಕು ಎಂದು ಅವರು ನುಡಿದರು.
ಇದೇ ಸಂದರ್ಭ 90ರ ಹರೆಯದ ಹಿರಿಯ ಭಾಗವತ, ಗಮಕಿ ನೀಲಾವರ ಲಕ್ಷ್ಮೀನಾರಾಯಣ ಅವರಿಗೆ ಬಣ್ಣದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಕ್ಷಗಾನ ವಿಮರ್ಶಕ ಎಸ್.ವಿ. ಉದಯಕುಮಾರ ಶೆಟ್ಟಿ ಶುಭಾಶಂಸನೆಗೈದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ, ನ್ಯಾಯವಾದಿ ಜಗನ್ನಿವಾಸರಾವ್ ಅಧ್ಯಕ್ಷತೆ ವಹಿಸಿದ್ದರು. ಮುದ್ದಣ್ಣ ಅಧ್ಯಯನ ಕೇಂದ್ರದ ಸ್ಥಾಪಕ ಗೌರವಾಧ್ಯಕ್ಷ ನಂದಳಿಕೆ ಬಾಲಚಂದ್ರರಾವ್, ಯಕ್ಷಗಾನ ಸಂಘಟಕ ಸದಾನಂದ ಪಾಟೀಲ್, ಕುಂದಾಪುರ ತಾಲೂಕು ಸ್ಥಾನಿಕ ಬ್ರಾಹ್ಮಣ ಅಧ್ಯಕ್ಷ ಗೋಪಾಲಕಷ್ಣ ಹೆಬ್ಬಾರ್ ಅಬ್ಲಿಕಟ್ಟೆ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನ ಸಂಚಾಲಕ ಮಂಜು ನಾಥಯ್ಯ ಉಪಸ್ಥಿತರಿದ್ದರು.
ಸೌಮ್ಯರಾವ್ ಪ್ರಾರ್ಥಿಸಿದರು. ಸಕ್ಕಟ್ಟು ರಾಜಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಕಷ್ಣ ಬಸ್ರೂರು ಸನ್ಮಾನಪತ್ರ ವಾಚಿಸಿದರು. ರಮ್ಯಕಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಕೃಪೆ :
http://www.vijaykarnataka.com
|
|
|